ಜನವರಿ 12 (ಸ್ವಾಮಿ ವಿವೇಕಾನಂದ ಜಯಂತಿ) - ಶಿಕ್ಷಕರಿಗಾಗಿ ವಿಶೇಷ ಸಂಗ್ರಹ
ಗೌರವಾನ್ವಿತ ಮುಖ್ಯೋಪಾಧ್ಯಾಯರೇ, ನನ್ನೆಲ್ಲಾ ಸಹೋದ್ಯೋಗಿ ಮಿತ್ರರೇ ಮತ್ತು ನನ್ನ ಪ್ರೀತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರೇ, ಎಲ್ಲರಿಗೂ ರಾಷ್ಟ್ರೀಯ ಯುವ ದಿನದ (ಸ್ವಾಮಿ ವಿವೇಕಾನಂದ ಜಯಂತಿ) ಹಾರ್ದಿಕ ಶುಭಾಶಯಗಳು.
ಪ್ರತಿವರ್ಷ ಜನವರಿ 12 ರಂದು ಭಾರತದ ಅತಿ ದೊಡ್ಡ ದಾರ್ಶನಿಕ, ಯುವಕರ ಪ್ರೇರಣಾ ಶಕ್ತಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು 'ರಾಷ್ಟ್ರೀಯ ಯುವ ದಿನ'ವನ್ನಾಗಿ ಆಚರಿಸಲಾಗುತ್ತದೆ. ಯುವಕರ ಮೇಲೆ ಅಪಾರ ನಂಬಿಕೆ ಇಟ್ಟಿದ್ದ ವಿವೇಕಾನಂದರು, ಯುವ ಸಮೂಹವು ದೇಶದ ಬೆನ್ನೆಲುಬು ಎಂದು ಸಾರಿದ್ದರು.
ಅವರು ನೀಡಿದ "ಎದ್ದೇಳಿ, ಜಾಗೃತರಾಗಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ" ಎಂಬ ಕರೆ ಇಂದಿಗೂ ಪ್ರತಿಯೊಬ್ಬ ಯುವಕನಿಗೆ ಸ್ಪೂರ್ತಿಯಾಗಿದೆ. ಸೋಲುಗಳಿಗೆ ಕುಗ್ಗದೆ, ಸವಾಲುಗಳನ್ನು ಮೆಟ್ಟಿ ನಿಂತು ಹೊಸ ಸಾಧನೆಗಳನ್ನು ಮಾಡಲು ವಿವೇಕಾನಂದರ ಬದುಕು ನಮಗೆ ದಾರಿದೀಪವಾಗಿದೆ.
ಶಿಕ್ಷಕರಾದ ನಾವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಧೈರ್ಯ ಮತ್ತು ನೈತಿಕ ಶಕ್ತಿಯನ್ನು ತುಂಬಬೇಕು. ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಶ್ರಮಿಸೋಣ.
ವೇದಿಕೆಯಲ್ಲಿರುವ ಗಣ್ಯರೆ, ಹಿರಿಯ ಗುರುಗಳೇ ಮತ್ತು ನನ್ನ ಮುದ್ದು ವಿದ್ಯಾರ್ಥಿಗಳೇ, ನಿಮ್ಮೆಲ್ಲರಿಗೂ ರಾಷ್ಟ್ರೀಯ ಯುವ ದಿನದ ಶುಭಾಶಯಗಳು.
ಸ್ವಾಮಿ ವಿವೇಕಾನಂದರು ಕೇವಲ ಸನ್ಯಾಸಿಯಲ್ಲ, ಅವರು ಭಾರತೀಯ ಯುವಕರ ಎದೆಯಲ್ಲಿ ದೇಶಭಕ್ತಿ ಮತ್ತು ಸ್ವಾಭಿಮಾನದ ಜ್ವಾಲೆಯನ್ನು ಹೊತ್ತಿಸಿದ ಮಹಾನ್ ನಾಯಕ. 1893 ರಲ್ಲಿ ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ಅವರು ನುಡಿದ ಆ ಅಮೃತವಾಣಿ "ಅಮೆರಿಕದ ಸಹೋದರ ಸಹೋದರಿಯರೇ" ಇಡೀ ವಿಶ್ವವೇ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿತು.
ನಮ್ಮಲ್ಲಿರುವ ಅಪರಿಮಿತ ಶಕ್ತಿಯನ್ನು ಅರಿತುಕೊಳ್ಳಬೇಕು. "ನಾವು ಅಬಲೆಯರಲ್ಲ, ಪ್ರಬಲರು" ಎಂಬ ಆತ್ಮವಿಶ್ವಾಸವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಬೆಳೆಸಿಕೊಳ್ಳಬೇಕು. ಅಜ್ಞಾನದ ಕತ್ತಲನ್ನು ತೊಡೆದುಹಾಕಿ ಜ್ಞಾನದ ಬೆಳಕಿನಲ್ಲಿ ಮುನ್ನಡೆಯಲು ವಿವೇಕಾನಂದರ ವಿಚಾರಗಳು ನಮಗೆ ಸದಾ ಮಾರ್ಗದರ್ಶಕವಾಗಿವೆ.
ಮಕ್ಕಳೇ, ನಿಮ್ಮ ಕನಸುಗಳು ದೊಡ್ಡದಿರಲಿ, ಆ ಕನಸುಗಳನ್ನು ನನಸು ಮಾಡಲು ಕಠಿಣ ಪರಿಶ್ರಮ ಮತ್ತು ಶ್ರದ್ಧೆ ಇರಲಿ.
ಗೌರವಾನ್ವಿತ ಅತಿಥಿಗಳೇ ಮತ್ತು ನನ್ನ ಪ್ರೀತಿಯ ಸಹೋದ್ಯೋಗಿಗಳೇ, ಎಲ್ಲರಿಗೂ ನಮಸ್ಕಾರ.
ಸ್ವಾಮಿ ವಿವೇಕಾನಂದರ ಪ್ರಕಾರ ಶಿಕ್ಷಣವೆಂದರೆ ಕೇವಲ ಅಕ್ಷರಾಭ್ಯಾಸ ಅಥವಾ ತಲೆಯಲ್ಲಿ ಮಾಹಿತಿಯನ್ನು ತುಂಬಿಕೊಳ್ಳುವುದಲ್ಲ. "ಮನುಷ್ಯನಲ್ಲಿ ಈಗಾಗಲೇ ಅಡಕವಾಗಿರುವ ಪರಿಪೂರ್ಣತೆಯ ಅಭಿವ್ಯೈತಿಯೇ ಶಿಕ್ಷಣ" ಎಂದು ಅವರು ವ್ಯಾಖ್ಯಾನಿಸಿದ್ದಾರೆ. ವ್ಯಕ್ತಿತ್ವ ನಿರ್ಮಾಣ ಮಾಡುವ, ಆತ್ಮವಿಶ್ವಾಸವನ್ನು ಬೆಳೆಸುವ ಮತ್ತು ಸಮಾಜಕ್ಕೆ ಉಪಯುಕ್ತವಾಗುವ ಶಿಕ್ಷಣವೇ ನಿಜವಾದ ಶಿಕ್ಷಣ.
ಇಂದಿನ ಯುವ ಪೀಳಿಗೆಯು ಪಾಶ್ಚಿಮಾತ್ಯ ಸಂಸ್ಕೃತಿಯ ಬೆನ್ನೇರಿ ತಮ್ಮತನವನ್ನು ಮರೆಯುತ್ತಿದೆ. ಆದರೆ ವಿವೇಕಾನಂದರು ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಹಿರಿಮೆಯನ್ನು ಜಗತ್ತಿಗೆ ಸಾರಿದರು. ವಿದ್ಯಾರ್ಥಿಗಳಾದ ನೀವು ನಮ್ಮ ಸಂಸ್ಕೃತಿಯನ್ನು ಗೌರವಿಸುತ್ತಾ, ಆಧುನಿಕ ಜ್ಞಾನವನ್ನು ಪಡೆದು ಮುನ್ನಡೆಯಬೇಕು.
ಶಿಕ್ಷಕರಾದ ನಾವು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಮತ್ತು ನಿಸ್ವಾರ್ಥ ಸೇವೆಯ ಗುಣವನ್ನು ಬೆಳೆಸಲು ಶ್ರಮಿಸೋಣ.
ಸಭೆಯಲ್ಲಿರುವ ಹಿರಿಯರೆ ಹಾಗೂ ನನ್ನ ಮುದ್ದು ಮಕ್ಕಳೇ, ಇಂದಿನ ಈ ವಿಶೇಷ ದಿನದ ಶುಭಾಶಯಗಳು.
ದೇಶದ ಯುವಶಕ್ತಿಯು ಸರಿಯಾದ ಹಾದಿಯಲ್ಲಿ ಸಾಗಿದರೆ ಆ ದೇಶವನ್ನು ವಿಶ್ವದ ಯಾವುದೇ ಶಕ್ತಿಯೂ ತಡೆಯಲು ಸಾಧ್ಯವಿಲ್ಲ. ಸ್ವಾಮಿ ವಿವೇಕಾನಂದರು ಯುವಕರ ಮೇಲೆ ಅಪಾರ ಭರವಸೆ ಇಟ್ಟಿದ್ದರು. "ನನಗೆ ನೂರು ಮಂದಿ ದೃಢಸಂಕಲ್ಪದ ಯುವಕರು ಸಿಕ್ಕರೆ ಸಾಕು, ನಾನು ಈ ಜಗತ್ತನ್ನೇ ಬದಲಾಯಿಸುತ್ತೇನೆ" ಎಂದು ಅವರು ಘರ್ಜಿಸಿದ್ದರು.
ಇಂದಿನ ಯುವಕರು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಭ್ರಮೆಯಲ್ಲಿ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ವಿವೇಕಾನಂದರ ಜೀವನದಿಂದ ಸ್ಪೂರ್ತಿ ಪಡೆದು, ತಮ್ಮ ಗುರಿಯತ್ತ ಗಮನ ಹರಿಸಿ, ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಶ್ರಮ, ಪ್ರಾಮಾಣಿಕತೆ ಮತ್ತು ನೈತಿಕತೆಯೇ ಯುವಕರ ನಿಜವಾದ ಆಭರಣಗಳು.
ಮಕ್ಕಳೇ, ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ಸದೃಢ ಭಾರತವನ್ನು ಕಟ್ಟಲು ಇಂದಿನಿಂದಲೇ ಶ್ರಮಿಸಿ.
ವೇದಿಕೆಯಲ್ಲಿರುವ ಗಣ್ಯರೇ ಮತ್ತು ನನ್ನೆಲ್ಲಾ ಆತ್ಮೀಯ ವಿದ್ಯಾರ್ಥಿ ಮಿತ್ರರೇ, ಎಲ್ಲರಿಗೂ ರಾಷ್ಟ್ರೀಯ ಯುವ ದಿನದ ಹಾರ್ದಿಕ ಶುಭಾಶಯಗಳು.
ಇಂದು ನಾವು ಬದುಕುತ್ತಿರುವ ಯಂತ್ರಯುಗದಲ್ಲಿ ಮಾನಸಿಕ ಒತ್ತಡ, ನೈತಿಕ ಅಧಃಪತನ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಬೋಧನೆಗಳು ನಮಗೆ ದಾರಿದೀಪವಾಗಿ ನಿಲ್ಲುತ್ತವೆ. "ಜೀವವೇ ಶಿವ" ಎಂದು ನಂಬಿ, ಬಡವರ ಮತ್ತು ದೀನದಲಿತರ ಸೇವೆಯೇ ನಿಜವಾದ ಈಶ್ವರ ಸೇವೆ ಎಂದು ಅವರು ನಮಗೆ ತೋರಿಸಿಕೊಟ್ಟರು.
ಅವರ ಪ್ರತಿಯೊಂದು ಮಾತಿನಲ್ಲಿಯೂ ಆತ್ಮವಿಶ್ವಾಸ ಮತ್ತು ದೈರ್ಯದ ಬುಗ್ಗೆ ಹರಿಯುತ್ತಿತ್ತು. ವಿದ್ಯಾರ್ಥಿಗಳಾದ ನೀವು ಕೇವಲ ಪರೀಕ್ಷೆಯಲ್ಲಿ ಅಂಕಗಳಿಸುವುದಷ್ಟೇ ಅಲ್ಲದೆ, ಉತ್ತಮ ಮಾನವರಾಗಿ ರೂಪುಗೊಳ್ಳಬೇಕು. ವಿವೇಕಾನಂದರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ.
ಬನ್ನಿ, ಈ ಯುವ ದಿನದಂದು ನಾವೆಲ್ಲರೂ ವಿವೇಕಾನಂದರ ಹಾದಿಯಲ್ಲಿ ನಡೆಯಲು ಸಂಕಲ್ಪ ಮಾಡೋಣ.